Darshan Sudeep's good news
![Image](https://blogger.googleusercontent.com/img/b/R29vZ2xl/AVvXsEjudwDmPsuOTa2WOKiwPZhP7XykSNc32ZlHLD1P4sg8rq666BciKfmMNx7ahvIKIPKqrtwaBEpDlu1UBRbKOUnvPZDdlYfjlSCLWMnqZLGoJf0SpMi5F4ZFUBZckRmotoTEwWGPRZNwrTvv/s640/dachukichucover-08-1502186128.jpg)
Darshan Sudeep's good news ವಿಷ್ಣು ದಾದ ಹಾಗೂ ಅಂಬರೀಶ್ ಬಿಟ್ಟರೆ ಗೆಳೆತನದಲ್ಲಿ ಮತ್ತೆ ನೆನಪಾಗೋದು ಇವರಿಬ್ಬರೆ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ದೋಸ್ತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.... ಅದರಲ್ಲೂ ಮುನಿಸಿಕೊಂಡು ಬೇರೆ ಬೇರೆ ಆದಾಗ ಇಬ್ಬರ ಅಭಿಮಾನಿಗಳು ಕಣ್ಣೀರು ಹಕ್ಕಿದ್ದು ಇದೆ , ಆದರೆ ಗಟ್ಟಿ ಆಗಿದ್ದ ಗೆಳೆತನದಲ್ಲಿ ಧಿಡಿರಣೆ ಬಿರುಕು ಕಾಣಿಸಿದ್ದೇಕೆ ? ಇಬ್ಬರ ಮುನಿಸಿಗೆ ಅಸಲಿ ಕಾರಣವೇನು ಅನ್ನೋದನ್ನು ಇಬ್ಬರು ಬಿಟ್ಟು ಕೊಟ್ಟಿಲ್ಲ.. ವಿಷಯ ಹೀಗಿದ್ದರು ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರ ನಡುವಿನ ಗೆಳೆತನ ಹಳಸಿದೆ ಅನ್ನೋದು ಗೊತ್ತಾಗೋಕ್ಕೆ ಹೆಚ್ಚು ಸಮಯ ಹಿಡಿದಿರಲಿಲ್ಲ... ಆದರಲ್ಲೂ ಸ್ವತಃ ದರ್ಶನ್ tweeter ಮೂಲಕ "ಇನ್ಮುಂದೆ ನಾವಿಬ್ಬರೂ ಸ್ನೇಹಿತರಲ್ಲ" ಅಂತ ಹೇಳಿದ್ಮೇಲೇ ಈ ಕುಚಿಕು ಗೆಳೆಯರು ಇನ್ಮುಂದೆ ಒಂದಾಗೋದಿಲ್ಲ ಅನ್ನೋದು confirm ಆಗಿತ್ತು... ಕಿಚ್ಚ ಹಾಗೂ ದಚ್ಚು ಅಭಿಮಾನಿಗಳಲ್ಲಿ ಈ ಇಬ್ಬರು ಮತ್ತೆ ಒಂದಾಗುತ್ತಾರೆ ಅಂತ ನಂಬಿಕೆ ಉಳಿದಿಲ್ಲ , ಇಬ್ಬರನ್ನು ಒಂದೇ ಸಿನಿಮಾದಲ್ಲಿ ಮತ್ತೆ ನೋಡಬಹುದು ಅನ್ನೋದು ಆಸೆನು ಕಮರಿ ಹೋಗಿದೆ... ಈ ಗ್ಯಾಪ್ ನಲ್ಲಿ ಸ್ಯಾಂಡಲ್ವುಡ್ ನಲ್ಲಿ ಸುದ್ದಿ ಒಂದು ಓಡಾಡೋಕೆ ಶುರುವಾಗಿದೆ... ಈ ಸುದ್ದಿ ಇಬ್ಬರ ಅಭಿಮಾನಿಗಳಿಗೂ ಅಚ್ಚರಿ ಹುಟ್ಟಿಸದೇ ಇರೋದಿಲ್ಲ...